Tuesday 28 April 2020

Shakatapura Shankaracharya Badari Peetha

ಲೇಖಕರು : ಶ್ರೀನಿವಾಸ ಮೂರ್ತಿ ಎನ್ ಎಸ್


ಕರ್ನಾಟಕದಲ್ಲಿ ಶೃಂಗೇರಿಯ ಹಲವು ಶಾಖ ಮಠಗಳಿವೆ.  ಆದರೆ ಬದರಿ ಶಂಕರಾಚಾರ್ಯ ಪೀಠದ ಸಂಸ್ಥಾನದ ಶಾಖೆ ಕರ್ನಾಟದಲ್ಲಿ ಇದೆ ಎಂಬದು ಬಹಳ ಜನರಿಗೆ ತಿಳಿದಿಲ್ಲ.  ಅಂತಹ ಅಪುರೂಪದ ಶಾಖೆಯೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನಲ್ಲಿ ತುಂಗಾ ನದಿ ತೀರದಲ್ಲಿರವ ಶಕಟಪುರದ (ಬಂಡೀಗುಡಿ) ಶ್ರೀ ಜಗದ್ಗುರು ಬದರಿ ಶಂಕರಾಚಾರ್ಯ ಸಂಸ್ಥಾನ ಅಥವಾ ಶ್ರೀ ವಿದ್ಯಾಪೀಠಂ

ಶ್ರೀ ಮಠದ ಇತಿಹಾಸ ಪುಟಗಳ ನೋಡಿದಲ್ಲಿ ವಿಜಯನಗರ ಕಾಲದಲ್ಲಿ (ಸುಮಾರು ೧೪ ನೇ ಶತಮಾನ)  ಹಲವು ಕಾಣದ ಕೈಗಳ ತೊಂದರೆಯಿಂದ ಜಗದ್ಗುರು ಶ್ರೀ ಸತ್ಯತೀರ್ಥ ಮಹಾಮುನಿಗಳು ಬದರೀನಾಥದಿಂದ ಶಾಂತಿಯನ್ನ ಅರಸುತ್ತಾ ಬರುತ್ತಾರೆ.  ಆಗ ಶೃಂಗೇರಿಗೆ ಹತ್ತಿರ ಇದ್ದ ಶಕಟಪುರದ ತುಂಗಾ ನದಿಯ ತೀರದಲ್ಲಿ ತಮ್ಮ ಧ್ಯಾನವನ್ನು ಮುಂದುವರಿಸಲು ನಿರ್ಧರಿಸುತ್ತಾರೆ.  ಅಲ್ಲಿಯೇ ಬದರಿಯ ಶಂಕರಾಚಾರ್ಯ ಸಂಸ್ಥಾನದ ಪೀಠವನ್ನು ಸ್ಥಾಪಿಸುತ್ತಾರೆ. ಪುರಾಣದಂತೆ ಇಲ್ಲಿ ಶಕಟಮುನಿಗಳು ನೆಲೆಸಿದ್ದ ಕಾರಣ ಇಲ್ಲಿಗೆ ಶಕಟಪುರ ಎಂಬ ಹೆಸುರು ಬಂದಿತು ಎಂಬ ನಂಬಿಕೆ ಇದೆ.

ವಿಶಾಲವಾದ ಪ್ರಾಂಗಣದಲ್ಲಿ ನಿರ್ಮಾಣವಾದ ಡ್ರಾವಿಡ ಶೈಲಿಯಲ್ಲಿ ನಿರ್ಮಾಣವಾದ ಇಲ್ಲಿನ ದೇವಾಲಯ ಮೂರು ಗರ್ಭಗುಡಿ, ಪ್ರದಕ್ಷಿಣಾ ಪಥ ಮತ್ತು ಪ್ರವೇಶ ಮಂಟಪವನ್ನು ಹೊಂದಿದೆ.  ಇಲ್ಲಿನ ದೇವಾಲಯದ ಗರ್ಭಗುಡಿಯಲ್ಲಿ ಶ್ರೀ ವಿದ್ಯಾ ರಾಜ ರಾಜೇಶ್ವರಿ, ಶ್ರೀ ವೇಣುಗೋಪಾಲ ಕೃಷ್ಣ ಮತ್ತು ಶ್ರೀ ಲಕ್ಷ್ಮೀ ನರಸಿಂಹ ಶಿಲ್ಪಗಳಿವೆ. ಇಲ್ಲಿ ಶ್ರೀ ಶಂಕರಾಚಾರ್ಯರ ಮೂರ್ತಿಯೂ ಇದೆ.  ದೇವಾಲಯಕ್ಕೆ ಚಿಕ್ಕ ಗೋಪುರವಿದ್ದರೆ ಪ್ರವೇಶದಾಲಿ ಬೃಹತ್ ರಾಜ ಗೋಪುರವನ್ನು ನಿರ್ಮಿಸಲಾಗಿದೆ. ದೇವಾಲಯದ ಮಂಟಪದ ಮೇಲಿನ ಕೋಷ್ಟಕಗಳಲ್ಲಿನ ಕೆತ್ತೆನೆ ಗಮನ ಸೆಳೆಯುತ್ತದೆ.

ಪ್ರಸ್ತುತ ೩೩ ನೇ ಪೀಠಾಧಿಪತಿಯಾಗಿ ಶ್ರೀ ವಿದ್ಯಾಭಿನವ ಶ್ರೀ ಶ್ರೀ ಕೃಷ್ಣಾನಂದ ತೀರ್ಥ ಮಹಾಸ್ವಾಮಿಗಳು ವೇದ, ವೇದಾಂತ ಪಾರಂಗತರಾಗಿ ಮಠದ ಆಧ್ಯಾತ್ಮ ಕೈಂಕರ್ಯಗಳನ್ನ ಭಕ್ತರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.  ಸುಮಾರು ಎರಡು ದಶಕಗಳಿಗೂ ಅಧಿಕ ಕಾಲ ನಾಡಿನ ಉದ್ದಗಲಕ್ಕೂ ಚಲಿಸಿ ಧರ್ಮ ಪ್ರಚಾರದ ಕಾರ್ಯ ಕೈಗೊಂಡಿದ್ದಾರೆ. ತಮ್ಮ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡುತ್ತ ಬಂದಿದ್ದು ಗೋ ಶಾಲೆ, ವೇದ ಪಾಠ ಶಾಲೆ, ಯಜ್ನ ಶಾಲೆ, ಬೃಹತಾದ ಮಠದ ಪ್ರಾಂಗಣ ನಿರ್ಮಿಸಿದ್ದಾರೆ.  ಪ್ರಶಾಂತ ವಾತಾವರಣದಲ್ಲಿರುವ ಈ ಮಠ ಅಧ್ಯಾತ್ಮದ ವಿಶ್ರಾಂತಿ ಬಯಸುವವರಿಗೆ ಉತ್ತಮ ಸ್ಥಳ.

ತಲುಪವ ಬಗ್ಗೆ : ಶಿವಮೊಗ್ಗ / ಚಿಕ್ಕಮಗಳೂರು – ಕೊಪ್ಪ – ಹರಿಹರಪುರ ಮಾರ್ಗದಲ್ಲಿ ಆಗುಂಬೆಗೆ ಹೋಗುವ ದಾರಿಯಲ್ಲಿ ಹೋಗಿ ಕಮ್ಮರಡಿಗೆ ಹೋಗುವ ದಾರಿಯಲ್ಲಿ ತಿರುವ ತೆಗೆದುಕೊಂಡು ಶಕಟಪುರವನ್ನ ತಲುಪಬಹುದು.


ಶ್ರೀನಿವಾಸ ಮೂರ್ತಿ ಎನ್. ಎಸ್.
Mobile - 9449553435



Monday 27 April 2020

Muthakuru Sri Lakshmi Narayana Temple

ಲೇಖಕರು : ಶ್ರೀನಿವಾಸ ಮೂರ್ತಿ ಎನ್ ಎಸ್


ವಿಜಯನಗರ ಕಾಲದ ದೇವಾಲಯಗಳು ನಮ್ಮ ನಾಡಿನಲ್ಲಿ ಇದ್ದಂತೆ ಪಕ್ಕದ ರಾಜ್ಯಗಳಲ್ಲಿ ಸಾಕಷ್ಟು ಇವೆ.  ಅವುಗಳಲ್ಲಿ ಕರ್ನಾಟಕದ ಶಿರಾ ತಾಲ್ಕೂಕಿಗೆ ಹೊಂದಿಕೊಂಡಂತೆ ಇರುವ ಮುತಕೂರಿನಲ್ಲಿ ಸುಂದರ ಶಿಲ್ಪ ಹೊಂದಿರುವ ದೇವಾಲಯ ಒಂದಿದೆ.  ಇಲ್ಲಿ ಶ್ರೀ ಲಕ್ಶ್ಮೀ ನಾರಾಯಣ ಎಂದು ಕರೆಯುವ ಸುಂದರ ದೇವಾಲಯ ಇದೆ.

ದೇವಾಲಯ ಗರ್ಭಗುಡಿ, ಅಂತರಾಳ, ನವರಂಗ ಹೊಂದಿದ್ದು ಗರ್ಭಗುಡಿಯಲ್ಲಿ ಸುಮಾರು ಏಳು ಅಡಿ ಎತ್ತರದ ಮೂರ್ತಿ ಇದೆ.  ಮೂರ್ತಿ ಶಂಖ, ಚಕ್ರ, ಗದೆ ಹಾಗು ಅಭಯ ಹಸ್ತ ಹೊಂದಿದ್ದು ಅದರಲ್ಲಿ ಪದ್ಮವಿದೆ.  ಮೂಲತಹ ಕೇಶವ ಮೂರ್ತಿ ಸ್ವರೂಪ ಹೊಂದಿರುವ ಈ ಮೂರ್ತಿಯ ಪಕ್ಕದಲ್ಲಿ ಪ್ರತ್ಯಕ ಲಕ್ಷ್ಮೀ ಮೂರ್ತಿ ಇರುವ ಕಾರಣ ಶ್ರೀ ಲಕ್ಶ್ಮೀ ನಾರಾಯಣ ಎಂದೇ ಭಕ್ತರಲ್ಲಿ ಪ್ರಸಿದ್ದಿ ಪಡೆದಿದೆ.  ಸುಂದರವಾದ ಕೊರಳಿನ ಆಭರಣ, ನಡುವಿನ ಪಟ್ಟಿ, ಕಾಲಿನ ಕಡಗದ ಕಲಾತ್ಮಕ ಕೆತ್ತೆನೆಗಳು ಮೂರ್ತಿಯನ್ನು ಸುಂದರವಾಗಿ ಕಾಣುವಂತೆ ಮಾಡಿದೆ.  ಪಕದಲ್ಲಿ ಶಂಖ, ಚಕ್ರಧಾರಿಯಾದ ಶ್ರೀ ಲಕ್ಶ್ಮೀ ದೇವಿಯ ಮೂರ್ತಿ ಇದೆ.

ದೇವಾಲಯವನ್ನು ಉರಿನವರು ನವೀಕರಿಸಿದ್ದು ವಿಶಾಲವಾದ ಕಲ್ಯಾಣ ಮಂಟಪ ನಿರ್ಮಿಸಿದ್ದಾರೆ.  ಇಲ್ಲಿ ನೂತನ ದ್ವಜ ಸ್ಥಂಭವನ್ನು ನಿರ್ಮಿಸಲಾಗಿದೆ. ವೈಶಾಖ ಮಾಸದಲ್ಲಿ ಇಲ್ಲಿ ಉತ್ಸವ ನಡೆಯಲಿದ್ದು ಕಲ್ಯಾಣೋತ್ಸವ, ವಿವಿಧ ಹೋಮಗಳನ್ನ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.


ದೇವಾಲಯದ ಎದುರು ಭಾಗದಲ್ಲಿ ಹತ್ತು ಅಡಿ ಎತ್ತರದ ಉಬ್ಬು ಶಿಲ್ಪದ ಆಂಜನೇಯ ಮೂರ್ತಿಯನ್ನ ಬಂಡೆಯ ಮೇಲೆ ಕೆತ್ತಲಾಗಿದೆ.  ಉರಿನ ಮಧ್ಯದಲ್ಲಿ ಸುಂದರ ಶಿವಾಲಯ ಇದ್ದು ಶಿವಲಿಂಗವಿದೆ. ದೇವಾಲಯದ ಪ್ರಾಕಾರದ ಗೋಡೆಯ ಮೇಲಿನ ದೇವ ಕೋಷ್ಟಕಗಳಲ್ಲಿನ ಗಾರೆ ಶಿಲ್ಪಗಳು ಗಮನ ಸೆಳೆಯುತ್ತವೆ. ಇಲ್ಲಿ ಸುಂದರ ಶಿವಲೀಲಾ ಮೂರ್ತಿಗಳ ಕೆತ್ತೆನೆ ನೋಡಬಹುದು.

ಸ್ಥಳ ಪುರಾಣದಂತೆ ಇಲ್ಲಿ ವಿಜಯನಗರ ಕಾಲದಲ್ಲಿ ಮುತ್ತುಗಳನ್ನ ಮಾರುತಿದ್ದರಿಂದ ಮುತಕೂರು ಎಂಬ ಹೆಸರು ಬಂದಿದೆ ಎಂಬ ನಂಬಿಕೆ ಇದೆ.

ತಲುಪುವ ಬಗ್ಗೆ : ಬೆಂಗಳೂರು – ಶಿರಾ – ಬರಗೂರು – ಹಾರೊಗೆರೆ ಮಾರ್ಗವಾಗಿ ತಲುಪಬಹುದು. ಶಿರಾದಿಂದ ಸುಮಾರು ೪೦ ಕಿ ಮೀ ದೂರದಲ್ಲಿ ಈ ದೇವಾಲಯ ಇದೆ.


ಶ್ರೀನಿವಾಸ ಮೂರ್ತಿ ಎನ್. ಎಸ್.
Mobile - 9449553435



Hariharapura Sri Sharada Peetham

ಲೇಖಕರು : ಶ್ರೀನಿವಾಸ ಮೂರ್ತಿ ಎನ್ ಎಸ್


ಶ್ರೀ ಶಂಕರಾಚಾರ್ಯರು ನಾಲ್ಕು ದಿಕ್ಕಿನಲ್ಲಿ ಪೀಠ ಸ್ಥಾಪಿಸಲು ಪ್ರವಾಸ ಮಾಡುವಾಗ ನಾಡಿನ ಹಲವು ಸ್ಥಳಗಳಿಗೆ ಭೇಟಿ ನೀಡಿ ತಮ್ಮ ಅಧ್ಯಾತ್ಮದ ಚಿಂತನೆಯನ್ನ ಪಸರಿಸಿದ್ದಾರೆ.  ಆ ಸಮಯದಲ್ಲಿ ಹಲವು ಸ್ಥಳಗಳ ಪ್ರಶಾಂತತೆ, ಭಕ್ತಿ ಮತ್ತು ಅಧ್ಯಾತ್ಮತೆಯ ಪರಿಸರಕ್ಕೆ ಮನಸೋತರೂ ಪೀಠ ಸ್ಥಾಪಿಸುಲು ಪೂರಕವಾದ ಪರಿಸರ ಕಾಣದ ಕಾರಣ ಅಲ್ಲಿ ಶ್ರೀ ಚಕ್ರವನ್ನು ಪ್ರತಿಷ್ಟಾಪಿಸಿ ಅದನ್ನು ಪೂಜಿಸಲು ಅರಾಧಿಸಲು ಬಿಟ್ಟು ಹೋಗುತ್ತಾರೆ. ಅಂತಹ ಶ್ರೀ ಶಂಕರಾಚಾರ್ಯಾದಿಂದ ಸ್ಥಾಪಿಸಿಲ್ಪಟ್ಟ ಶ್ರೀ ಚಕ್ರಗಳು ದೇಶದ ಹಲವೆಡೆ ಪೂಜಿಸಲ್ಪಡುತ್ತಿದ್ದು ಕರ್ನಾಟಕದಲ್ಲೂ ಅವು ಪೂಜೆಗೊಳ್ಳುತ್ತಿವೆ.  ಅಂತಹ ಪ್ರಮುಖ ಕ್ಷೇತ್ರಗಳಲ್ಲಿ ಎದ್ದು ಕಾಣುವುದೇ ಶೃಂಗೇರಿ.  ಅದರ ಹತ್ತಿರದಲ್ಲೇ ಇರುವ ಶಂಕರಾಚಾರ್ಯರಿಂದ ಶ್ರೀ ಚಕ್ರವನ್ನು ಪ್ರತಿಷ್ಟಾಪಿಸಿದ ಮತ್ತೊಂದು ಪೀಠವಿದೆ.  ಅದುವೇ ಹರಿಹರಪುರ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಶ್ಮೀ ನರಸಿಂಹ ಪೀಠಮ್  - ಶ್ರೀ ಶಾರದಾ ಪೀಠ


ಶ್ರೀ ಶಂಕರಾಚಾರ್ಯರು ಭಾರತದಲ್ಲಿ ಧರ್ಮ ಪ್ರಚಾರದ ನಿಮಿತ್ತ ಭಾರತ ಪ್ರವಾಸ ಕಾಲದಲ್ಲಿ ದಕ್ಷಿಣದಲ್ಲಿ ಪೀಠ ಸ್ಥಾಪನೆಗೆ ಜಾಗ ಅರುಸುತ್ತಿರುವಾಗ ಈ ಕ್ಷೇತ್ರಕ್ಕೆ ಬಂದಿದ್ದರು. ಆಗ ಅಲ್ಲಿ ನರಸಿಂಹ ದೇವರ ಪೂಜೆ ನಿರ್ವಹಿಸುತ್ತಾ ಇದ್ದ ಶ್ರೀ ಕೃಷ್ಣ ಯೋಗಿಂದ್ರರ ಸನ್ನಿಧಾನದಲ್ಲಿ ಇಲ್ಲಿನ ಸುಂದರ ಪರಿಸರ ಕಂಡು ತಮ್ಮ ಅಧಿ ದೇವತೆಯಾಗಿದ್ದ ಶ್ರೀ ಶಾರದಾ ಮಾತೆಯನ್ನು ತುಂಗಾ ನದಿ ತೀರದಲ್ಲಿ ಶ್ರೀ ಚಕ್ರದ ಮೂಲಕ ಸ್ಥಾಪಿಸಿ ಉಪಾಸನೆಯ ನಿರ್ವಹಣೆಯನ್ನು ಶ್ರೀ ಕೃಷ್ಣ ಯೋಗೀಂದ್ರರಿಗೆ ಒಪ್ಪಿಸಿ ಮುಂದೆ ಶೃಂಗೇರಿಗೆ ಪ್ರಯಾಣ ಬೆಳಸಿದರು. ನಂತರ ಕಾಲದಲ್ಲಿ ಶೃಂಗೇರಿಯಲ್ಲಿ ಪೀಠ ಸ್ಥಾಪಿತವಾದ ನಂತರ ಪ್ರಥಮ ಪೀಠಾದೀಶ ಶ್ರೀ ಸುರೇಶ್ವಾರಾಚಾರ್ಯರು ಶ್ರೀ ಕೃಷ್ಣ ಯೋಗೀಂದ್ರರಿಗೆ ಸಂನಾಸ್ಯ ದೀಕ್ಷೆ ನೀಡಿ ಇಲ್ಲಿ ಶ್ರೀ ಶಾರದಾ ಪೀಠ ಸ್ಥಾಪನೆಯಾಗಿ ಇಂದಿಗೂ ಪೂಜೆ ನಡೆಯುತ್ತಿದೆ. 

ಸ್ಥಳ ಪುರಾಣದಂತೆ ಸಿದ್ದಿ ಕ್ಷೇತ್ರವಾದ ಇಲ್ಲಿ ದಕ್ಷ ಪ್ರಜಾಪತಿಯು ಇಲ್ಲಿ ಮಹಾಯಾಗ ಮಾಡಿದ್ದು ಶಿವನೇ ಇಲ್ಲಿ ಎಲ್ಲರನ್ನು ಅನುಗ್ರಹಸಿದ ಎಂಬ ನಂಬಿಕೆ ಇದೆ.  ಇಲ್ಲಿನ ಅರಣ್ಯದ ನಡುವೆ ದೇವಾಲಯ ಇದ್ದು ಶ್ರೀ ದಕ್ಷಹರ ಸೋಮೇಶ್ವರ ಎಂದೇ ಪೂಜೆಗೊಳ್ಳುತ್ತಿದೆ.  ಶ್ರೀ ಅಗಶ್ತ್ಯ ಮಹರ್ಷಿಗಳು ಇಲ್ಲಿ ತಪೋನಿರತರಾಗಿದ್ದು ಇಲ್ಲಿನ ತುಂಗಾನದಿಯ ತಟದ ಪರಿಸರಕ್ಕೆ ಮನಸೋತು ತಾವು ಪೂಜಿಸುತ್ತಿದ್ದ ಶ್ರೀ ಲಕ್ಷ್ಮೀನರಸಿಂಹದ ಚಿಕ್ಕ ಸಾಲಿಗ್ರಾಮ ಮೂರ್ತಿಗಳನ್ನು ತಮ್ಮ ಶಿಷ್ಯ ಶ್ರೀ ಗೋವಿಂದ ಯೋಗಿಗಳಿಗೆ ನೀಡಿ ತೆರೆಳಿದರು ಎಂಬ ನಂಬಿಕೆ ಇದೆ.  ಈಗಲೂ ಶ್ರೀ ಲಕ್ಷ್ಮೀನರಸಿಂಹ ಮೂರ್ತಿಗಳು ಪೂಜಿಸಲ್ಪಡುತ್ತಿದೆ. ಇತಿಹಾಸ ಪುಟದಲ್ಲಿ ೧೪ ನೇ ಶತಮಾನದಲ್ಲಿ ವಿಜಯನಗರದ ಹರಿಹರನ ಕಾಲದಲ್ಲಿ ಇಲ್ಲಿ ಅಗ್ರಹಾರವನ್ನು ನಿರ್ಮಿಸಿ ಹರಿಹರಿಹಪುರದ ಎಂಬ ಹೆಸರು ಇಟ್ಟ ಬಗ್ಗೆ  ಇತಿಹಾಸದಲ್ಲಿ ಉಲ್ಲೇಖವಿದೆ.

ಈಗ ಇಲ್ಲಿ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿಗಳು ಪೀಠಾದಿಶರಾಗಿದ್ದಾರೆ.  ಹಿಂದಿನ ಗುರುಗಳು ತಮ್ಮ ಉತ್ತರಾಧಿಕಾರಿ ನೇಮಿಸಕ ಕಾರಣ ಶ್ರೀ ಶೃಂಗೇರಿ ಸ್ವಾಮಿಜಿಗಳಿಂದ ಉತ್ತರಾಧಿಕಾರಿಯಾಗಿ ನೇಮಕಗೊಂಡ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿಗಳು ಮೂಲತಹ ಶೃಂಗೇರಿ ಸಮೀಪದ ಉಳುವೆ ಗ್ರಾಮದವರು. ತಾಂತ್ರಿಕ ವಿಜ್ನಾನದಲ್ಲಿ ಪದವಿ ಪಡೆದು ಸೇವೆ ಸಲ್ಲಿಸುವಾಗ ರಾಮಕೃಷ್ಣ ಆಶ್ರಮದ ಸಂಪರ್ಕದಲ್ಲಿ  ಆದ್ಯಾತ್ಮದ ನೆಲೆಯನ್ನ ಕಂಡುಕೊಂಡು ನಂತರ ಶೃಂಗೇರಿಯಲ್ಲಿ ಹೆಚ್ಚಿನ ವೇದ ಅಧ್ಯಯನ ಪಡೆದರು.  ಪ್ರಸ್ತುತ ಶ್ರೀ ಮಠದ ಅಭ್ಯುದಯಕ್ಕೆ ಮರೆಯಾಗುತ್ತಿರುವ ಗುರು ಕುಲದ ಪರಿಕಲ್ಪನೆಯನ್ನು  ಆಧುನಿಕ ಕಾಲಕ್ಕೆ ಹೊಂದಿಸಿ ಮರಳಿ ತರುವ ಕಾಯಕಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗ ಇದ್ದ ಹಳೆಯ ಶ್ರೀ ಮಠಕ್ಕೆ ಹೊಸ ಸ್ಪರ್ಶ ನೀಡುತ್ತಿದ್ದು ಇಡೀ ದೇವಾಲಯವನ್ನು ಶೀಲಾಮಯವಾಗಿ ಪುನರ್ ನಿರ್ಮಾಣ ಮಾಡುತ್ತಿದ್ದು  ವೇದ ಪಾಠಶಾಲೆ ಮುಂತಾದ ಕಾರ್ಯಕ್ರಮಗಳಿಂದ ಹೊಸ ಸ್ಪರ್ಶ ನೀಡಿದ್ದಾರೆ.


ತಲುಪವ ಬಗ್ಗೆ : ಶಿವಮೊಗ್ಗ – ಕೊಪ್ಪ ಮಾರ್ಗವಾಗಿ ಶೃಂಗೇರಿ ಮಾರ್ಗದಲ್ಲಿ ಸುಮಾರು ೧೦ ಕಿ ಮೀ ದೂರದಲ್ಲಿದೆ.  ಬೆಂಗಳೂರು  - ಶೃಂಗೇರಿ ಮಾರ್ಗವಾಗಿ ಬರುವುದಾದಾದರೆ ಕೊಪ್ಪ – ಶಿವಮೊಗ್ಗ ಮಾರ್ಗದಲ್ಲಿ ಸುಮಾರು ೧೮ ಕಿ ಮೀ ದೂರದಲ್ಲಿದೆ.

ಶ್ರೀನಿವಾಸ ಮೂರ್ತಿ ಎನ್. ಎಸ್.
ಬೆಂಗಳೂರು – ೫೬೦ ೦೧೯
Mobile - 9449553435



Pavagada Shaneeswara Temple