Friday 8 May 2020

Holalu - Hassan District Yoga Naraimha Temple

ಹೊಳಲುವಿನ ಸುಂದರ ಶಿಲ್ಪ ಯೋಗನರಸಿಂಹ
ಲೇಖಕರು : ಶ್ರೀನಿವಾಸ ಮೂರ್ತಿ ಎನ್ ಎಸ್


ಹೊಯ್ಸಳರ ಕಾಲದಲ್ಲು ಹಲವು ನರಸಿಂಹ ದೇವಾಲಯಗಳು ನಿರ್ಮಾಣಗೊಂಡವು.  ನರಸಿಂಹ ಜಯಂತಿಯಲ್ಲಿ ಹಲವು ದೇವಾಲಯಗಳಲ್ಲಿ ಇಂತಹ ದೇವಾಲಯಗಳನ್ನೆಲ್ಲಾ ನೆನಪು ಮಾಡುವಾಗ ಸುಂದರ ಶಿಲ್ಪ ಹೊಂದಿದ್ದರೂ ಅವನತಿಯ ಸಾಗಿರುವ ದೇವಾಲಯದಲ್ಲಿನ ದೇವಾಲಯದ ನೆನಪು ಇಂದಿಗೆ ಸೂಕ್ತ ಅನಿಸುತ್ತದೆ.  ಅಂತಹ ಅಪುರೂಪದ ಶಿಲ್ಪ ಇರುವುದು ಹಾಸನ ಜಿಲ್ಲೆಯಲ್ಲಿನ ಶಾಂತಿಗ್ರಾಮದ ಬಳಿ ದುದ್ದ ಹೋಬಳಿಯಲ್ಲಿ ಇರುವ ಹೊಳಲು ಗ್ರಾಮದಲ್ಲಿ.

ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ಈ ದೇವಾಲಯ ಗರ್ಭಗುಡಿ, ಅಂತರಾಳ ಹಾಗು ನವರಂಗ ಹೊಂದಿದ್ದು ಮುಂದಿನ ಮುಖಮಂಟಪ ನಂತರ ಕಾಲದ ವಿಸ್ತರಣೆ. ಗರ್ಭಗುಡಿಯಲ್ಲಿ ಎರಡಿ ಎತ್ತರದ ಪಾಣಿ ಪೀಠದ ಮೇಲೆ ಸುಮಾರು ಅರು ಅಡಿ ಎತ್ತರದ ನರಸಿಂಹ ಶಿಲ್ಪವಿದೆ. ಯೋಗ ಆಸೀನ ಭಂಗಿಯಲ್ಲಿನ ಈ ಶಿಲ್ಪ ಎರಡೂ ಕಾಲನ್ನು ಒಂದರ ಒಳಗೆ ಒಂದು ಸೇರಿದಂತೆ ಇರುವುದು ವಿಷೇಶ.  ಮೇಲಿನ ಕೈನಲ್ಲಿ ಶಂಖ ಮತ್ತು ಚಕ್ರ ಇದ್ದು ಕೆಳಗಿನ ಎರಡು ಕೈಗಳು ಕಾಲಿನ ಮೇಲೆ ಇದ್ದು ಯೋಗಾಸಿನ ಭಂಗಿಯಲ್ಲಿ ಇರುವದರಿಂದ ಯೋಗ ನರಸಿಂಹ ಎಂಬ ಹೆಸರು ಇದೆ.  ಶಿಲ್ಪದ ಪ್ರಭಾವಳಿಯಲ್ಲಿ ಸುಂದರ ದಶಾವಾತರದ ಕೆತ್ತೆನೆ ಇದೆ. ಸುಂದರ ಕಿರಿಟದ ಕೆತ್ತೆನೆ ಇದ್ದು ಕೈನಲ್ಲಿನ ಕಲಾತ್ಮಕ ಉಗುರಿನ ಕೆತ್ತೆನೆ ಗಮನ ಸೆಳೆಯುತ್ತದೆ.

ನವರಂಗದಲ್ಲಿ ಹೊಯ್ಸಳ ಶೈಲಿಯ ಕಂಭಗಳಿದ್ದು ವಿತಾನದಲ್ಲಿ ಕಮಲದ ಕೆತ್ತೆನೆ ಇದೆ. ಮುಂದಿನ ಮಂಟಪವನ್ನು ನಂತರದ ಕಾಲದಲ್ಲಿ ದೇವಾಲಯದ ಸಂರಕ್ಷಣೆಗೆ ನಿರ್ಮಿಸಿಲಾಗಿದ್ದು ಈಗ ಅದು ಅವನತಿಯತ್ತ ಸಾಗಿದೆ.  ಕಳೆದ ಹಲವು ದಶಕದಿಂದ ಅನಾಥವಾಗಿದ್ದ ಈ ದೇವಾಲಯಕ್ಕೆ ಹಾಸನ ಜಿಲ್ಲ ಐತಿಹಾಸಿಕ ಸಂರಕ್ಷಣ ವೇದಿಕೆ ಮತ್ತು ರಾಷ್ಟ್ರ ಗೌರವ ಸಂರಕ್ಷಣಾ ಪರಿಷತ್  ದೀಪ ಹಾಗು ಬಾಗಿಲಿನ ವ್ಯವಸ್ಥೆ ಮಾಡಿದ್ದು ನವೀಕರಣಕ್ಕಾಗಿ ಕಾಯುತ್ತಿದೆ.  ಊರಿನವರು ಮತ್ತು ಸರ್ಕಾರ ಇದನ್ನು ಸಂರಕ್ಷಣೆ ಮಾಡದಿದ್ದಲ್ಲಿ ಅಪುರೂಪದ ಶಿಲ್ಪದ ಈ ದೇವಾಲಯ ಮರೆತ ಪುಟಗಳಲ್ಲಿ ಸೇರೀತು.

ದೇವಾಲಯ ನವೀಕರಣದಲ್ಲಿ ಶ್ರೀ ನಟರಾಜ ಪಂಡಿತರು ಅಪಾರ ಶ್ರಮಿಸಿತ್ತಿದ್ದು, ಎಲ್ಲ ಕಾರ್ಯಗಳಲ್ಲಿ ಟಿ.ವಿ. ನಟರಾಜ ಪಂಡಿತರ ಪತ್ನಿ ಶ್ರೀಮತಿ ಜಯಲಕ್ಷ್ಮೀ ಹಾಗೂ ಮಕ್ಕಳಾದ ಚಿ. ಪವನ್ ಭಾರದ್ವಾಜ್ ಹಾಗೂ ಪುತ್ರಿ ಚಿ. ಭಾರ್ಗವಿ ಪಂಡಿತ್ ಇವರ ಪೂರ್ಣ ಸಹಕಾರವಿದೆ. ಇದಲ್ಲದೆ ಮಿತ್ರರಾದ ಶ್ರೀ ಗಿರೀಶ್ ಭಾರದ್ವಾಜ್ (90360 15520), ಉತ್ತಿಷ್ಠ ಭಾರತದ ಕಾರ್ಯಕರ್ತರಾದ ಶ್ರೀ ನೀರಜ್ ಕಾಮತ್ ( 9964142207), ಶ್ರೀನಿವಾಸ್ (99645 78740)

ತಲುಪವ ಬಗ್ಗೆ : ಮಂಗಳೂರು – ಬೆಂಗಳೂರು ಹೆದ್ದಾರಿಯಲ್ಲಿ ಶಾಂತಿಗ್ರಾಮದ ಬಳಿ ಸುಮಾರು ೩ ಕಿ ಮೀ ದೂರದಲ್ಲಿದೆ.

ಶ್ರೀನಿವಾಸ ಮೂರ್ತಿ ಎನ್. ಎಸ್.
Mobile - 9449553435







Tuesday 28 April 2020

Shakatapura Shankaracharya Badari Peetha

ಲೇಖಕರು : ಶ್ರೀನಿವಾಸ ಮೂರ್ತಿ ಎನ್ ಎಸ್


ಕರ್ನಾಟಕದಲ್ಲಿ ಶೃಂಗೇರಿಯ ಹಲವು ಶಾಖ ಮಠಗಳಿವೆ.  ಆದರೆ ಬದರಿ ಶಂಕರಾಚಾರ್ಯ ಪೀಠದ ಸಂಸ್ಥಾನದ ಶಾಖೆ ಕರ್ನಾಟದಲ್ಲಿ ಇದೆ ಎಂಬದು ಬಹಳ ಜನರಿಗೆ ತಿಳಿದಿಲ್ಲ.  ಅಂತಹ ಅಪುರೂಪದ ಶಾಖೆಯೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನಲ್ಲಿ ತುಂಗಾ ನದಿ ತೀರದಲ್ಲಿರವ ಶಕಟಪುರದ (ಬಂಡೀಗುಡಿ) ಶ್ರೀ ಜಗದ್ಗುರು ಬದರಿ ಶಂಕರಾಚಾರ್ಯ ಸಂಸ್ಥಾನ ಅಥವಾ ಶ್ರೀ ವಿದ್ಯಾಪೀಠಂ

ಶ್ರೀ ಮಠದ ಇತಿಹಾಸ ಪುಟಗಳ ನೋಡಿದಲ್ಲಿ ವಿಜಯನಗರ ಕಾಲದಲ್ಲಿ (ಸುಮಾರು ೧೪ ನೇ ಶತಮಾನ)  ಹಲವು ಕಾಣದ ಕೈಗಳ ತೊಂದರೆಯಿಂದ ಜಗದ್ಗುರು ಶ್ರೀ ಸತ್ಯತೀರ್ಥ ಮಹಾಮುನಿಗಳು ಬದರೀನಾಥದಿಂದ ಶಾಂತಿಯನ್ನ ಅರಸುತ್ತಾ ಬರುತ್ತಾರೆ.  ಆಗ ಶೃಂಗೇರಿಗೆ ಹತ್ತಿರ ಇದ್ದ ಶಕಟಪುರದ ತುಂಗಾ ನದಿಯ ತೀರದಲ್ಲಿ ತಮ್ಮ ಧ್ಯಾನವನ್ನು ಮುಂದುವರಿಸಲು ನಿರ್ಧರಿಸುತ್ತಾರೆ.  ಅಲ್ಲಿಯೇ ಬದರಿಯ ಶಂಕರಾಚಾರ್ಯ ಸಂಸ್ಥಾನದ ಪೀಠವನ್ನು ಸ್ಥಾಪಿಸುತ್ತಾರೆ. ಪುರಾಣದಂತೆ ಇಲ್ಲಿ ಶಕಟಮುನಿಗಳು ನೆಲೆಸಿದ್ದ ಕಾರಣ ಇಲ್ಲಿಗೆ ಶಕಟಪುರ ಎಂಬ ಹೆಸುರು ಬಂದಿತು ಎಂಬ ನಂಬಿಕೆ ಇದೆ.

ವಿಶಾಲವಾದ ಪ್ರಾಂಗಣದಲ್ಲಿ ನಿರ್ಮಾಣವಾದ ಡ್ರಾವಿಡ ಶೈಲಿಯಲ್ಲಿ ನಿರ್ಮಾಣವಾದ ಇಲ್ಲಿನ ದೇವಾಲಯ ಮೂರು ಗರ್ಭಗುಡಿ, ಪ್ರದಕ್ಷಿಣಾ ಪಥ ಮತ್ತು ಪ್ರವೇಶ ಮಂಟಪವನ್ನು ಹೊಂದಿದೆ.  ಇಲ್ಲಿನ ದೇವಾಲಯದ ಗರ್ಭಗುಡಿಯಲ್ಲಿ ಶ್ರೀ ವಿದ್ಯಾ ರಾಜ ರಾಜೇಶ್ವರಿ, ಶ್ರೀ ವೇಣುಗೋಪಾಲ ಕೃಷ್ಣ ಮತ್ತು ಶ್ರೀ ಲಕ್ಷ್ಮೀ ನರಸಿಂಹ ಶಿಲ್ಪಗಳಿವೆ. ಇಲ್ಲಿ ಶ್ರೀ ಶಂಕರಾಚಾರ್ಯರ ಮೂರ್ತಿಯೂ ಇದೆ.  ದೇವಾಲಯಕ್ಕೆ ಚಿಕ್ಕ ಗೋಪುರವಿದ್ದರೆ ಪ್ರವೇಶದಾಲಿ ಬೃಹತ್ ರಾಜ ಗೋಪುರವನ್ನು ನಿರ್ಮಿಸಲಾಗಿದೆ. ದೇವಾಲಯದ ಮಂಟಪದ ಮೇಲಿನ ಕೋಷ್ಟಕಗಳಲ್ಲಿನ ಕೆತ್ತೆನೆ ಗಮನ ಸೆಳೆಯುತ್ತದೆ.

ಪ್ರಸ್ತುತ ೩೩ ನೇ ಪೀಠಾಧಿಪತಿಯಾಗಿ ಶ್ರೀ ವಿದ್ಯಾಭಿನವ ಶ್ರೀ ಶ್ರೀ ಕೃಷ್ಣಾನಂದ ತೀರ್ಥ ಮಹಾಸ್ವಾಮಿಗಳು ವೇದ, ವೇದಾಂತ ಪಾರಂಗತರಾಗಿ ಮಠದ ಆಧ್ಯಾತ್ಮ ಕೈಂಕರ್ಯಗಳನ್ನ ಭಕ್ತರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.  ಸುಮಾರು ಎರಡು ದಶಕಗಳಿಗೂ ಅಧಿಕ ಕಾಲ ನಾಡಿನ ಉದ್ದಗಲಕ್ಕೂ ಚಲಿಸಿ ಧರ್ಮ ಪ್ರಚಾರದ ಕಾರ್ಯ ಕೈಗೊಂಡಿದ್ದಾರೆ. ತಮ್ಮ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡುತ್ತ ಬಂದಿದ್ದು ಗೋ ಶಾಲೆ, ವೇದ ಪಾಠ ಶಾಲೆ, ಯಜ್ನ ಶಾಲೆ, ಬೃಹತಾದ ಮಠದ ಪ್ರಾಂಗಣ ನಿರ್ಮಿಸಿದ್ದಾರೆ.  ಪ್ರಶಾಂತ ವಾತಾವರಣದಲ್ಲಿರುವ ಈ ಮಠ ಅಧ್ಯಾತ್ಮದ ವಿಶ್ರಾಂತಿ ಬಯಸುವವರಿಗೆ ಉತ್ತಮ ಸ್ಥಳ.

ತಲುಪವ ಬಗ್ಗೆ : ಶಿವಮೊಗ್ಗ / ಚಿಕ್ಕಮಗಳೂರು – ಕೊಪ್ಪ – ಹರಿಹರಪುರ ಮಾರ್ಗದಲ್ಲಿ ಆಗುಂಬೆಗೆ ಹೋಗುವ ದಾರಿಯಲ್ಲಿ ಹೋಗಿ ಕಮ್ಮರಡಿಗೆ ಹೋಗುವ ದಾರಿಯಲ್ಲಿ ತಿರುವ ತೆಗೆದುಕೊಂಡು ಶಕಟಪುರವನ್ನ ತಲುಪಬಹುದು.


ಶ್ರೀನಿವಾಸ ಮೂರ್ತಿ ಎನ್. ಎಸ್.
Mobile - 9449553435



Monday 27 April 2020

Muthakuru Sri Lakshmi Narayana Temple

ಲೇಖಕರು : ಶ್ರೀನಿವಾಸ ಮೂರ್ತಿ ಎನ್ ಎಸ್


ವಿಜಯನಗರ ಕಾಲದ ದೇವಾಲಯಗಳು ನಮ್ಮ ನಾಡಿನಲ್ಲಿ ಇದ್ದಂತೆ ಪಕ್ಕದ ರಾಜ್ಯಗಳಲ್ಲಿ ಸಾಕಷ್ಟು ಇವೆ.  ಅವುಗಳಲ್ಲಿ ಕರ್ನಾಟಕದ ಶಿರಾ ತಾಲ್ಕೂಕಿಗೆ ಹೊಂದಿಕೊಂಡಂತೆ ಇರುವ ಮುತಕೂರಿನಲ್ಲಿ ಸುಂದರ ಶಿಲ್ಪ ಹೊಂದಿರುವ ದೇವಾಲಯ ಒಂದಿದೆ.  ಇಲ್ಲಿ ಶ್ರೀ ಲಕ್ಶ್ಮೀ ನಾರಾಯಣ ಎಂದು ಕರೆಯುವ ಸುಂದರ ದೇವಾಲಯ ಇದೆ.

ದೇವಾಲಯ ಗರ್ಭಗುಡಿ, ಅಂತರಾಳ, ನವರಂಗ ಹೊಂದಿದ್ದು ಗರ್ಭಗುಡಿಯಲ್ಲಿ ಸುಮಾರು ಏಳು ಅಡಿ ಎತ್ತರದ ಮೂರ್ತಿ ಇದೆ.  ಮೂರ್ತಿ ಶಂಖ, ಚಕ್ರ, ಗದೆ ಹಾಗು ಅಭಯ ಹಸ್ತ ಹೊಂದಿದ್ದು ಅದರಲ್ಲಿ ಪದ್ಮವಿದೆ.  ಮೂಲತಹ ಕೇಶವ ಮೂರ್ತಿ ಸ್ವರೂಪ ಹೊಂದಿರುವ ಈ ಮೂರ್ತಿಯ ಪಕ್ಕದಲ್ಲಿ ಪ್ರತ್ಯಕ ಲಕ್ಷ್ಮೀ ಮೂರ್ತಿ ಇರುವ ಕಾರಣ ಶ್ರೀ ಲಕ್ಶ್ಮೀ ನಾರಾಯಣ ಎಂದೇ ಭಕ್ತರಲ್ಲಿ ಪ್ರಸಿದ್ದಿ ಪಡೆದಿದೆ.  ಸುಂದರವಾದ ಕೊರಳಿನ ಆಭರಣ, ನಡುವಿನ ಪಟ್ಟಿ, ಕಾಲಿನ ಕಡಗದ ಕಲಾತ್ಮಕ ಕೆತ್ತೆನೆಗಳು ಮೂರ್ತಿಯನ್ನು ಸುಂದರವಾಗಿ ಕಾಣುವಂತೆ ಮಾಡಿದೆ.  ಪಕದಲ್ಲಿ ಶಂಖ, ಚಕ್ರಧಾರಿಯಾದ ಶ್ರೀ ಲಕ್ಶ್ಮೀ ದೇವಿಯ ಮೂರ್ತಿ ಇದೆ.

ದೇವಾಲಯವನ್ನು ಉರಿನವರು ನವೀಕರಿಸಿದ್ದು ವಿಶಾಲವಾದ ಕಲ್ಯಾಣ ಮಂಟಪ ನಿರ್ಮಿಸಿದ್ದಾರೆ.  ಇಲ್ಲಿ ನೂತನ ದ್ವಜ ಸ್ಥಂಭವನ್ನು ನಿರ್ಮಿಸಲಾಗಿದೆ. ವೈಶಾಖ ಮಾಸದಲ್ಲಿ ಇಲ್ಲಿ ಉತ್ಸವ ನಡೆಯಲಿದ್ದು ಕಲ್ಯಾಣೋತ್ಸವ, ವಿವಿಧ ಹೋಮಗಳನ್ನ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.


ದೇವಾಲಯದ ಎದುರು ಭಾಗದಲ್ಲಿ ಹತ್ತು ಅಡಿ ಎತ್ತರದ ಉಬ್ಬು ಶಿಲ್ಪದ ಆಂಜನೇಯ ಮೂರ್ತಿಯನ್ನ ಬಂಡೆಯ ಮೇಲೆ ಕೆತ್ತಲಾಗಿದೆ.  ಉರಿನ ಮಧ್ಯದಲ್ಲಿ ಸುಂದರ ಶಿವಾಲಯ ಇದ್ದು ಶಿವಲಿಂಗವಿದೆ. ದೇವಾಲಯದ ಪ್ರಾಕಾರದ ಗೋಡೆಯ ಮೇಲಿನ ದೇವ ಕೋಷ್ಟಕಗಳಲ್ಲಿನ ಗಾರೆ ಶಿಲ್ಪಗಳು ಗಮನ ಸೆಳೆಯುತ್ತವೆ. ಇಲ್ಲಿ ಸುಂದರ ಶಿವಲೀಲಾ ಮೂರ್ತಿಗಳ ಕೆತ್ತೆನೆ ನೋಡಬಹುದು.

ಸ್ಥಳ ಪುರಾಣದಂತೆ ಇಲ್ಲಿ ವಿಜಯನಗರ ಕಾಲದಲ್ಲಿ ಮುತ್ತುಗಳನ್ನ ಮಾರುತಿದ್ದರಿಂದ ಮುತಕೂರು ಎಂಬ ಹೆಸರು ಬಂದಿದೆ ಎಂಬ ನಂಬಿಕೆ ಇದೆ.

ತಲುಪುವ ಬಗ್ಗೆ : ಬೆಂಗಳೂರು – ಶಿರಾ – ಬರಗೂರು – ಹಾರೊಗೆರೆ ಮಾರ್ಗವಾಗಿ ತಲುಪಬಹುದು. ಶಿರಾದಿಂದ ಸುಮಾರು ೪೦ ಕಿ ಮೀ ದೂರದಲ್ಲಿ ಈ ದೇವಾಲಯ ಇದೆ.


ಶ್ರೀನಿವಾಸ ಮೂರ್ತಿ ಎನ್. ಎಸ್.
Mobile - 9449553435



Pavagada Shaneeswara Temple